ದಾವಣಗೆರೆ.ಮಾ.೨೫; ನಗರದ ಖಾಸಗಿ ವಾಹಿನಿ ಜಿಲ್ಲಾ ವರದಿಗಾರ ಮಧುನಾಗರಾಜ್ ಕುಂದುವಾಡ ಅವರ ಧರ್ಮಪತ್ನಿ ಮಧುರ ಇವರು ಹೊರ ವಲಯದ ಅನಾಥ ಆಶ್ರಮದಲ್ಲಿ ಯುಗಾದಿ ಹಬ್ಬದ ಜೊತೆಗೆ ಹೋಳಿಗೆ ಊಟ ಹಾಕಿಸಿ ಜನ್ಮದಿನ ಆಚರಿಸಿಕೊಂಡು ಸಾರ್ಥಕತೆ ಮೆರೆದಿದ್ದಾರೆ…ದಾವಣಗೆರೆಯ ಹೊರ ವಲಯದಲ್ಲಿರುವ ತುರ್ಚಗಟ್ಟ ಬಳಿ ಇರುವ ಸಾಧನ ವೃದ್ದಾಶ್ರಮದಲ್ಲಿ ಅನಾಥರೊಂದಿಗೆ ಮಧುರ ಇವರು ಯುಗಾದಿ ಹಬ್ಬದ ಜೊತೆಗೆ ಜನ್ಮದಿನ ಆಚರಿಸಿ ಮಾದರಿಯಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಸಂಸ್ಥಾಪಕಿ ಡಾ. ಪುಷ್ಪಲತಾ ಪವಿತ್ರಾರಾಜ್, ಇಂತಹ ಆಶ್ರಮಗಳು ಉಳಿಯುವುದು ಇಂತಹ ದಾನಿಗಳಿಂದಲೇ, ಮಧುನಾಗರಾಜ್ ಅವರು ಮಾಧ್ಯಮ ಕ್ಷೇತದಲ್ಲಿ ಬಡವರಿಗೆ, ನಿರ್ಗತಿಕರಿಗೆ, ರೈತರಿಗೆ ನೆರವಾಗುತ್ತಿದ್ದಾರೆ, ಅವರ ಪತ್ನಿ ಮಧುರ ಅವರು ಸಹ ಸಮಾಜ ಸೇವೆ ಮನೋಭಾವನೆ ರೂಢಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ, ಅವರು ಬಂದು 70ರಿಂದ 80 ಮಂದಿಗೆ ಅನಾಥರ ಜೊತೆ ಯುಗಾದಿ ಹಬ್ಬ, ಜನ್ಮದ ದಿನ ಆಚರಿಸಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ, ಎಷ್ಟೆ ಹಣವಿದ್ದರು ಸಹಾಯ ಮಾಡಲು ಯಾರು ಮುಂದೆ ಬರುವುದಿಲ್ಲ, ಇಂತವರು ಮಾದರಿಯಾಗಿದ್ದಾರೆ, ಎಲ್ಲಾ ಅನಾಥರ, ವೃದ್ದರ ಆಶೀರ್ವಾದ ಮಧುನಾಗರಾಜ್ ಅವರ ದಂಪತಿಗಳ ಮೇಲೆ ಇರಲಿದ್ದು, ದಂಪತಿಗಳ ಈ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಆಶೀಸಿದರು..ಈ ಸಂದರ್ಭದಲ್ಲಿ ಪತ್ರಕರ್ತ ಮಧುನಾಗರಾಜ್ ಕುಂದುವಾಡ, ಸಣ್ಣನಿಂಗಪ್ಪ, ನಿಂಗಪ್ಪ, ನೇತ್ರಾವತಿ, ಮಾನ್ಯ, ಮದನ್ ಸೇರಿದಂತೆ ಮತ್ತಿತರರಿದ್ದರು.