ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಜು.೨೪:- ಅಧಿಕ ಶ್ರಾವಣ ಮಾಸದ ಪ್ರಯುಕ್ತ ಹರಪನಹಳ್ಳಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ. ಶ್ರೀ ಲಕ್ಷ್ಮೀ ನಾರಾಯಣ ದೇವರ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಸುಮಂಗಳಿಯರು ಸೇರಿ ಶ್ರೀಲಕ್ಷ್ಮೀ ನಾರಾಯಣ ದೇವರಿಗೆ 33 ಪೂಜಾ ಸಾಮಗ್ರಿಗಳಿಂದ ಅರ್ಚನೆಯನ್ನು ಮಾಡಿದರು.ಓಂ ಶ್ರೀ ಪುರುಷೋತ್ತಮ ಸಹಸ್ರ ನಾಮಾವಳಿಯಿಂದ ಪೂಜೆಯೊಂದಿಗೆ. ಲೋಕಕಲ್ಯಾಣಾರ್ಥಕವಾಗಿ ದೇವರಲ್ಲಿ ಪ್ರಾರ್ಥಿಸಿದರು. ಈ ಕಾರ್ಯಕ್ರಮದಲ್ಲಿ ವಾಸವಿ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಮುದುಗಲ್ ಸುಜಾತ, ಕಾರ್ಯದರ್ಶಿ ಶ್ರೀಮತಿ ಹುಬ್ಬಳ್ಳಿ ಜ್ಯೋತಿ, ಖಜಾಂಚಿ ಶ್ರೀಮತಿ ಪೆಂಡು ಕೂರ್ ಸೌಮ್ಯ. ನಿರ್ದೇಶಕರು ಮತ್ತು ಎಲ್ಲಾ ಸದಸ್ಯರು ಈ ಪೂಜೆಯನ್ನು ನೆರವೇರಿಸಿದರು ಹಾಗೂ ಆರ್ಯವೈಶ್ಯ ಮಹಾಮಂಡಳಿ ಮತ್ತು ಆರ್ಯವೈಶ್ಯ ಕುಲ ಬಾಂಧ ವರೆಲ್ಲರ ಸಹಕಾರದೊಂದಿಗೆ ಈ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿತು.