
ದಾವಣಗೆರೆ. ಮೇ.೨೫; ಪ್ರಸ್ತುತ ದಿನಮಾನದಲ್ಲಿ ಹೆಚ್ಚು ಜನ ಅಂತರ್ಜಾಲದ ಬಳಕೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಹೆಚ್ಚು ಹೆಚ್ಚು ಸೈಬರ್ ಕ್ರೈಮ್ಗಳು ನಡೆಯುತ್ತಿವೆ. ಅದರಲ್ಲೂ ಅಕ್ಷರಸ್ಥರೆ ಹೆಚ್ಚು ಸೈಬರ್ ಕ್ರೈಮ್ಗಳಿಗೆ ಒಳಗಾಗುತ್ತಿದ್ದಾರೆ, ಆಂಡ್ರಾಯ್ಡ್ ಮೊಬೈಲ್ಯಿದ್ದರೆ ಸೆರಗಿನಲ್ಲಿ ಕೆಂಡಯಿದ್ದ ಹಾಗೆ ಎಂದು ಸೈಬ ಕ್ರೈಮ್ ಇನ್ಸ್ಪೆಕ್ಟರ್ ಚಿ.ಮಂಜುನಾಥ್ ಹೇಳಿದರು.ನಗರದ ಎ.ವಿ.ಕಮಲಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್.ಘಟಕದ ವತಿಯಿಂದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನದ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಯುವಕ, ಯುವತಿಯರು ಸಕ್ರಿಯವಾಗಿದ್ದಾರೆ. ಅನುಪಯುಕ್ತ ಅಂಕ್ಗಳನ್ನು ಮತ್ತು ಆ್ಯಪ್ಗಳನ್ನು ಬಳಸುವುದನ್ನು ನಿಲ್ಲಿಸಬೇಕು, ಇಲ್ಲವಾದರೆ ಸೈಬರ್ ಕ್ರೈಮ್ ನಂತಹ ಕೃತ್ಯಗಳಿಗೆ ಒಳಗಾಗುತ್ತೀರಿ ಎಂದರು. ಜೊತೆಗೆ ಸೈಬರ್ ಕ್ರೈಮ್ ಜರುಗಿದ ತಕ್ಷಣ ಮಾಡಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಸಿದರು.ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿಯಾದ ಡಾ. ಲೋಹಿತ್ ಹೆಚ್.ಎಂ. ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಮೊಬೈಲ್ ಬಳಕೆಯಿಂದ ಜೀವನ ಪ್ರೀತಿ ಮತ್ತು ಸಂಬಂಧಗಳ ನಡುವೆ ಅಂತರ ಉಂಟಾಗುತ್ತಿದೆ. ತಂದೆ ತಾಯಿಗಳು ಪದವಿ ಹಂತದ ಮಕ್ಕಳನ್ನು ಜಾಗ್ರತೆಯಿಂದ ಮನೆಯಲ್ಲಿ ಗಮನಿಸುತ್ತಿರಬೇಕು ಎಂದು ಹೇಳಿದರು. ಎ.ವಿ.ಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲ ಸೊಪ್ಪಿನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸೈಬರ್ ಕ್ರೈಮ್ ಬಗ್ಗೆ ಪ್ರಸ್ತುತ ದಿನಮಾನದಲ್ಲಿ ಎಚ್ಚರಿಕೆ ಇರಬೇಕಾದ ಸಂಗತಿ, ಮೊಬೈಲ್ ಬಳಕೆಯನ್ನು ಮಾಡುವಾಗ ಜಾಗರೂಕರಾಗಿರಬೇಕು, ವಿದ್ಯಾರ್ಥಿಗಳು ಅಂತರ್ಜಾಲ ಬಳಕೆಯನ್ನು ಕಡಿಮೆ ಮಾಡಬೇಕು. ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕೆಂದು ತಿಳಿಸಿದರು.ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಶಿವಕುಮಾರ್ ಆರ್.ಆರ್. ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಉಷಾ ಎಂ.ಆರ್. ಉಪಸ್ಥಿತರಿದ್ದರು. ಸೃಷ್ಟಿ ಎಂ.ಪಿ., ಸಹನ ಎಸ್, ನಿರೂಪಿಸಿದರು. ಸಹನ ಮತ್ತು ಸಂಗಡಿಗರು ಪ್ರಾರ್ಥನೆ ಮಾಡಿದರು. ತುಳಜಾಲಕ್ಷ್ಮಿ ಜೆ.ಸಿ. ಸ್ವಾಗತಿಸಿದರು. ರುಚಿತ ಸಿ. ವಂದಿಸಿದರು.