ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಕಾರ್ಯಗಾರ

ಮಾನ್ವಿ ಮಾ ೧೦ :- ಪಟ್ಟಣದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ದೆಹಲಿ,ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ,ತಾಲೂಕು ಕಾನೂನು ಸೇವಾ ಸಮಿತಿ, ತಾ.ನ್ಯಾಯಾವಾದಿಗಳ ಸಂಘ ಸಂಯುಕ್ತಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಕಾರ್ಯಗಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶರಾದ ದೀಪಾ ಜಿ. ಮನೇರಕರ್ ಉದ್ಘಾಟಿಸಿ ಮಾತನಾಡಿ ನಮ್ಮ ದೇಶದಲ್ಲಿ ವೇದಗಳ ಕಾಲದಿಂದಲು ಮಹಿಳೆಯರಿಗೆ ಉನ್ನತವಾದ ಸ್ಥಾನವನ್ನು ನೀಡಲಾಗಿದೆ. ಸ್ವಾಮಿ ವಿವೇಕಾನಂದರು ತಿಳಿಸಿದಂತೆ ದೇಶದ ಪ್ರಗತಿಯನ್ನು ಮಹಿಳೆಯರಿಗೆ ನೀಡುವ ಗೌರವದಿಂದ ತಿಳಿಯಲು ಸಾಧ್ಯವಾಗುತ್ತದೆ ೨೦೧೪ರಲ್ಲಿ ನಡೆದ ನಿರ್ಭಯ ಪ್ರಕರಣದಿಂದ ಮಹಿಳೆಯರ ರಕ್ಷಣೆಯ ಅನೇಕ ಕಾಯ್ದೆಗಳಲ್ಲಿ ಬದಲಾವಣೆಯನ್ನು ಮಾಡಲಾಗಿದ್ದರು. ಕೂಡ ಪುರಷರ ಮನಸ್ಥಿತಿಯಲ್ಲಿ ಬದಲಾವಣೆ ಯಾಗದೆ ಇರುವುದರಿಂದ ಇನ್ನೂ ಕೂಡ ಮಹಿಳೆಯರ ಮೇಲೆ ದುಷ್ಕೃತ್ಯಗಳು ನಡೆಯುತ್ತಿವೆ.
ಸಮಾಜದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸ್ತ್ರೀಯರಿಗೆ ಆದ್ಯತೆಯನ್ನು ನೀಡಬೇಕು, ಎಂದರು..
ಮಹಿಳೆಯರನ್ನು ನೋಡುವ ಮನೋಭಾವನೆ ಪುರುಷರಲ್ಲಿ ಬದಲಾಗಬೇಕು ಸಂವಿಧಾನದಲ್ಲಿ ಕಾಲಂ ೧೫ರಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿಶೇಷವಾದ ಕಾನೂನುಗಳ ಮೂಲಕ ಮೀಸಲಾತಿಯನ್ನು ನೀಡಲಾಗಿದೆ.ಇಂದು ಮಹಿಳೆ ಎಲ್ಲಾ ರಂಗಗಳಲ್ಲಿಯು ಸಾಧನೆಯನ್ನು ತೊರುತ್ತಿದ್ದು ಸ್ವತಂತ್ರ ಮನೋಭಾವನೆಯಿಂದಾಗಿ ನಮ್ಮ ಸಂಸ್ಕೃತಿಯಂತೆ ವೈವಾಹಿಕ ಸಂಬಂಧಿಗಳಲ್ಲಿ ಕುಟುಂಬಗಳ ನಿರ್ವಹಣೆಯಲ್ಲಿ ಮಹಿಳೆಯರು ವಿಫಲವಾಗುತ್ತಿರುವುದರಿಂದ ಇಂದು ಕೌಟುಂಬಿಕ ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ.
ಕಾನೂನಿನಲ್ಲಿ ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ರೂಪಿಸಲಾಗಿದ್ದು ಅವುಗಳ ಮಾಹಿತಿಯನ್ನು ತಿಳಿದುಕೊಂಡು ಅವುಗಳನ್ನು ಪ್ರಸಂಗ ಬಂದಾಗ ಅವುಗಳನ್ನು ಬಳಸಿಕೊಂಡು ರಕ್ಷಣೆಯನ್ನು ಪಡೆದುಕೊಳ್ಳುವುದಕ್ಕೆ ನಿಮಗೆ ಕಾನೂನು ಸೇವ ಸಮಿತಿ ಹಾಗೂ ಕಾನೂನು ಸೇವ ಪ್ರಾಧಿಕಾರದ ಮೂಲಕ ನೆರವನ್ನು ಪಡೆಯಬಹುದು.ವಿವಾಹಿತ ಮಹಿಳೆಯರು ಕೌಟುಂಬಿಕ ದೌರ್ಜನ್ಯಕಾಯ್ದೆ ಅಡಿಯಲ್ಲಿ ಕುಟುಂಬದಲ್ಲಿ ನಡೆಯುವ ದೌರ್ಜನ್ಯಗಳಿಂದ ,ವರದಕ್ಷಿಣೆ ಕಿರುಕುಳ ದಿಂದ ರಕ್ಷಣೆಯನ್ನು ಪಡೆಯಬಹುದಾಗಿದ್ದರು ಕಾಯ್ದೆಯ ದುರುಪಯೊಗವಾಗ ಬಾರದು ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನವಾದ ಹಕ್ಕು, ಸಮಾನತೆಯ ಹಕ್ಕುಗಳನ್ನು ನೀಡಲಾಗಿದೆ ಅವುಗಳನ್ನು ಮಹಿಳೆಯರು ಪಡೆದುಕೊಳ್ಳಲು ನ್ಯಾಯಾಲಯದ ನೆರವನ್ನು ಮಹಿಳೆಯರು ಪಡೆಯಬಹುದು ಎಂದು ತಿಳಿಸಿದರು.
ಕಿರಿಯ ಶ್ರೇಣಿ ನ್ಯಾಯಾಧೀಶರಾದ ಆಶಪ್ಪ ಬಿ.ಸಣ್ಣಮನಿ ಮಾತನಾಡಿ ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಿದ ಸಮನತೆ ಸಂಪೂರ್ಣವಾಗಿ ದೊರೆತಿದೆಯೇ ಎನ್ನುವುದನ್ನು ಇಂದು ಪರಾಮರ್ಶೆ ನಡೆಸುವ ಅಗತ್ಯವಿದೆ ಪತಿ,ಪತ್ನಿಯರು ಸಂಸಾರದಲ್ಲಿ ಪರಸ್ಪರ ಸೌಹಾರ್ಧತೆಯಿಂದ, ನಂಬಿಕೆ ಮತ್ತು ಹೊಂ ದಾಣಿಕೆಯಿಂದ ನಡೆದುಕೊಂಡಾಗ ಮಾತ್ರ ಜೀವನ ಸುಂದರವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರ ಪತ್ನಿಯರನ್ನು ಹಾಗೂ ವಿವಿಧ ಇಲಾಖೆಗಳಲ್ಲಿ ಉತ್ತಮವಾದ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ರಾಣಿ ಲಕ್ಷಿ?ಮದೇವಿನಾಯಕ್ ರವರು ಸಿವಿಲ್ ಮತ್ತು ಕ್ರೀಮಿನಲ್ ಕಾನೂನುಗಳ ಬಗ್ಗೆ ಕುಟುಂಬ ಕಾನೂನುಗಳ ಬಗ್ಗೆ ಯಲ್ಲಪ್ಪ ಬಾದರದಿನ್ನಿ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ನ್ಯಾಯಾವಾದಿಗಳ ಸಂಘದ ತಾ.ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ಕಾರ್ಯದರ್ಶಿ ರವಿಕುಮಾರ ಪಾಟೀಲ್. ಸೇರಿದಂತೆ ಹಿರಿಯ ವಕೀಲರು, ಮಹಿಳಾ ನ್ಯಾಯವಾದಿಗಳಾದ ಚಂದ್ರಕಲಾ, ಶ್ರೀದೇವಿ,ಅರ್ಷಿಯಾ ಹುಮಾ, ಶ್ಟೇಲಾ ಶರ್ಲಾಟ್,ಗುಂಡಮ್ಮ, ಜರೀನಾ ಬೇಗಾಂ,.ರಾಣಿ ಇಂದಿರಾ ಸುಹಾಸಿನಿ ನಾಯಕ,ಪೂಜ್ಯ,ಐಶ್ವರ್ಯ,ರಾಣಿ ವೆಂಕಟರತ್ನನಾಯಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು,